ಸಾವಯವ ಕೃಷಿ ಪದ್ದತಿ ಅಳವಡಿಸಿಕೋಳ್ಳಲು ರೈತರಿಗೆ ತಾಳ್ಮೆ ಬಹು ಮುಖ್ಯ ಕೃಷಿ ವಿಜ್ಞಾನಿ ಡಾ.ರೂಪ ಶ್ರೀನಿವಾಸ್!
ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸವನಪುರ ಗ್ರಾಮದಲ್ಲಿ ಅಕ್ಷಯಕಲ್ಪ ಬಳಗ ಹಾಗೂ ಸಾವಯವ ಸ್ವಾವಲಂಬಿ ಸುಸ್ಥಿರ ಕೃಷಿಕರ ಬಳಗದ ವತಿಯಿಂದ ಶನಿವಾರ ರೈತ ಶಿವಕುಮಾರ್ ಸ್ವಾಮಿ ರವರ ತೋಟದಲ್ಲಿ ಭೂಮಿಯ ಫಲವತ್ತತೆ ಹಾಗೂ ತೋಟಗಳಲ್ಲಿ ರೈತರು ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳುವ ಕುರಿತು ಕಾರ್ಯಗಾರ ಅಮ್ಮಿಕೋಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿ ಡಾ.ರೂಪಾ ಶ್ರೀನಿವಾಸ್ ಮಾತನಾಡಿ ಮೊದಲಿಗೆ ಭೂಮಿಯಲ್ಲಿ ಸಾವಯವ ಕೃಷಿ ಅಳವಡಿಸಿಕೊಳ್ಳಲು ರೈತರಿಗೆ ತಾಳ್ಮೆ ಬಹು ಮುಖ್ಯಗಾಗಿದ್ದು ಹಂತ ಹಂತವಾಗಿ ಭೂಮಿಗೆ ರಾಸಯನಿಕ ಬಳಕೆಯನ್ನು ಕಡಿತಗೋಳಿಸಬೇಕು ಮಣ್ಣಿನ ಫಲವತ್ತತೆ ಕಾಪಾಡುವುದಕ್ಕೆ ಕೋಟ್ಟಿಗೆ ಗೊಬ್ಬರದ ಪಾತ್ರ ಬಹು ಮುಖ್ಯವಾಗಿದ್ದು ಕೊಟ್ಟಿಗೆಯಿಂದ ಬರುವ ಸಗಣಿಯನ್ನು ನೇರವಾಗಿ ಭೂಮಿಯಲ್ಲಿ ಹಾಕುವ ಬದಲು ಕಾಂಪೋಸ್ಟ್ ಅಥಾವ ಎರೆಹುಳು ತೋಟ್ಟಿಗಳಲ್ಲಿ ಕ್ರೂಡಿಕರಿಸಿ ನಂತರ ಗೊಬ್ಬರವನ್ನು ಬಳಸುವುದರಿಂದ ಕಾಂಪೋಸ್ಟ್ ಅಥವಾ ಎರೆಹುಳು ಗೊಬ್ಬರ ಮಣ್ಣಿನಲ್ಲಿ ಬೇಗನೆ ಸೇರುತ್ತದೆ ಇದರಿಂದ ನಾವು ಬೆಳೆಯುವ ಬೆಳೆಗಳಿಗೆ ಪೋಷಕಾಂಶಗಳು ಬೇಗನೆ ಸಿಗುವ ಕಾರಣ ಇಳುವರಿ ಹೆಚ್ಚುತ್ತದೆ ಜಿವಾಮೃತ ಪಂಚಗವ್ಯ ಸಿಂಪರಣೆಯ ಕಾರಣದಿಂದ ಸಸ್ಯಗಳಿಗೆ ನೇರವಾಗಿ ಪೋಷಕಾಂಶಗಳು ದೊರೆಯುತ್ತವೆ ರೈತರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸಾವಯವ ಕೃಷಿ ಪದತ್ತಿಗೆ ಉತ್ತೇಜನ ನೀಡುತಿದ್ದು ರಾಸಾಯನಿಕ ರಹಿತವಾಗಿ ಕೃಷಿ ಪದ್ದತಿ ಅಳವಡಿಸಿಕೊಂಡ ತಕ್ಷಣ ಉತ್ತಮ ಇಳುವರಿ ಸಿಗುವುದಿಲ್ಲ ಎಳೆಂಟು ವರ್ಷಗಳ ಸತತ ಪ್ರಯತ್ನದಿಂದ ನಾವು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳ ಬಹುದು ಮಣ್ಣಿನ ಜೊತೆಗೆ ಎಲ್ಲರು ಒಡನಾಟ ಇಟ್ಟುಕೊಂಡಾಗ ಇದೆಲ್ಲವು ಸಾಧ್ಯವಾಗುತ್ತದೆ ಎಂದರು ಕಾರ್ಯಕ್ರಮದಲ್ಲಿ ರೈತ ಶಿವಕುಮಾರ್ ಸ್ವಾಮಿ ಹಾಗೂ ಅನುಪಮ ದಂಪತಿಗೆ 2025/26 ನೇ ಸಾಲಿನ ಅಕ್ಷಯಕಲ್ಪ ರೈತ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು ಈ ವೇಳೆ ಅಕ್ಷಯಕಲ್ಪ ಬಳಗದ ರಘುರಾಮ್.ಮಾಹಾಲಿಂಗಪ್ಪ.ರಾಜಗೋಪಾಲ್.ಹಾಗೂ ಸುತ್ತಮುತ್ತಲ ರೈತರು ಕಾರ್ಯಗಾರದಲ್ಲಿ ಭಾಗಿಯಾಗಿದ್ದರು @publicnewskunigal