ಕಳ್ಳತನ ನಡೆದರು ಪತ್ತೆ ಮಾಡಿಲ್ಲ ಎಸ್ಪಿ ಸಾಹೇಬರೆ ನಿವಾದ್ರು ಪತ್ತೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಹಿರಂಗ ಪತ್ರ ಸಾಮಾಜಿಕ ಜಾಲತಾಣದ ಮೂಲಕ ಪೊಲೀಸರ ಕಾರ್ಯ ವೈಕರಿಯನ್ನು ಪ್ರಶ್ನಿಸಿದ ನಾಗರೀಕರು!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದಿಂದ ಹಲವು ಕಳ್ಳತನ ಪ್ರಕರಣಗಳು ವರದಿಯಾದರು ಸಹ ಪೊಲೀಸರು ಯಾವುದೆ ರೀತಿಯ ಕ್ರಮ ಕೈಗೊಂಡಿಲ್ಲ ಈ ಬಗ್ಗೆ ದೂರು ಕೊಟ್ಟರು ಪ್ರಯೋಜನವಿಲ್ಲ ಎಸ್ಪಿ ಸಾಹೇಬರೆ ನಿವಾದ್ರು ಕ್ರಮ ಕೈಗೊಂಡು ಕಳ್ಳರನ್ನು ಪತ್ತೆ ಮಾಡಿ ಎಂಬ ವಾಟ್ಸಪ್ ಸಂದೇಶ ಎಲ್ಲೆಡೆ ಹರಿದಾಡುತ್ತಿದ್ದು ಸದ್ಯ ಸಾರ್ವಜನಿಕಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ ಹುಲಿಯೂರುದುರ್ಗ ಪೊಲೀಸರ ಕಾರ್ಯ ವೈಖರಿಯನ್ನು ನಾಗರೀಕರು ಸಾಮಾಜಿಕ ಜಾಲತಾಣದ ಮೂಲಕ ಪ್ರಶ್ನಿಸಿದ್ದಾರೆ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಚೌಡನಕುಪ್ಪೆ ಹಾಗೂ ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್.ಬ್ಯಾಡರಹಳ್ಳಿ ಗ್ರಾಮದಲ್ಲಿ ಏಳರಿಂದ ಎಂಟು ಬಾರಿ ಮನೆ ಕಳ್ಳತನ ಬೈಕ್ ಕಳ್ಳತನ ಹಸು ಕಳ್ಳತನ ಕುಂಠಯ್ಯನಪಾಳ್ಯ ಗ್ರಾಮದಲ್ಲಿ ಟ್ರಕ್ಟರ್ ಕಳ್ಳತನ ನಡೆದಿದೆ ಹಾಗೂ ಕಳೆದೆರಡು ದಿನಗಳ ಹಿಂದೆ ಕೆಂಚನಹಳ್ಳಿ ಗ್ರಾಮದಲ್ಲಿ ಪಟ್ಟಲದಮ್ಮ ಕೊಲ್ಲಾಪುರದಮ್ಮ ದೇವಾಲಯದ ಬಾಗಿಲು ಮುರಿದು ಹುಂಡಿ ಕಳ್ಳತನ ನಡೆದಿದೆ ಇದಲ್ಲದೆ

ಸಂತೆಮಾವತ್ತೂರು.ಮೋದೂರು.ಹೆಗ್ಗಡತಿಹಳ್ಳಿ ರಾಘವನಹೊಸೂರು ಗ್ರಾಮಗಳಲ್ಲಿ ರೈತರ ಬೋರ್ವೆಲ್ ಗಳಲ್ಲಿ ಕೇಬಲ್ ಕಳವು ಪ್ರಕರಣ ಹೆಚ್ಚಾಗಿದ್ದು ಈ ಬಗ್ಗೆ 112 ಗೆ ಕರೆ ಮಾಡಿ ನೇರವಾಗಿ ಠಾಣೆಯಲ್ಲಿ ದೂರು ನೀಡಿದರು ಸಹ ಇದುವರೆಗೆ ಪತ್ತೆಯಾಗಿಲ್ಲ ಠಾಣೆಯ ಎಸ್.ಐ ರವರು ಯಾವುದೆ ಗ್ರಾಮಗಳಿಗೆ ಬೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿಲ್ಲ ಸರಿಯಾದ ತನಿಖೆ ನಡೆಸಿ ರೈತರು ಕಳೆದುಕೊಂಡ ಯಾವ ವಸ್ತುಗಳನ್ನು ಪತ್ತೆಮಾಡಿಲ್ಲ ಆದ್ದರಿಂದ ರೈತರು ಕಳೆದುಕೊಂಡ ವಸ್ತುಗಳನ್ನು ಪತ್ತೆಮಾಡಿ ಕೊಡುವಂತೆ ಜಿಲ್ಲೆಯ ಎಸ್ಪಿ ರವರಿಗೆ ಮನವಿ ಮಾಡಿರುವ ವಾಟ್ಸಪ್ ಸಂದೇಶ ಇದೀಗ ವೈರಲ್ ಹಾಗಿದೆ ಇನ್ನಾದರು ಸಂಬಂಧ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಬೇಕಿದೆ @publicnewskunigal