ಸಚಿವ ಸಂಪುಟಕ್ಕೆ ಮಾಜಿ ಸಹಕಾರ ಸಚಿವ ಕೆ,ಎನ್ ರಾಜಣ್ಣ ರವರನ್ನು ಮರು ನೇಮಿಸಿಕೊಳ್ಳುವಂತೆ ಶಿವಣ್ಣ ಒತ್ತಾಯ!
ಕುಣಿಗಲ್ ಪಟ್ಟಣದ ವ್ಯವಸಾಯೋತ್ಪನ್ನ ಸಹಕಾರ ಸಂಘದ ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವ್ಯವಸಾಯ ಉತ್ಪನ್ನ ಸಹಕಾರ ಸಂಘದ ತಾಲೂಕು ಅಧ್ಯಕ್ಷ ಶಿವಣ್ಣ ಮಾತನಾಡಿ ಸಚಿವ ಸಂಸ್ಥಾನದಿಂದ ಕೆ.ಎನ್ ರಾಜಣ್ಣ ರವರನ್ನು ವಜಾಗೊಳಿಸಿರುವುದು ಖಂಡನೀಯ ಕಾಂಗ್ರೆಸ್ ಹೈಕಮಾಂಡ್ ಹಾಗು ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈ ಬಿಟ್ಟು ಅವರನ್ನು ಕೂಡಲೆ ಸಚಿವ ಸಂಪುಟಕ್ಕೆ ಮರು ನೇಮಿಸಿಕೊಳ್ಳಬೇಕು ಕೆ.ಎನ್ ರಾಜಣ್ಣ ನವರ ವಿರುದ್ದ ರಾಜಕೀಯ ಪಿತೂರಿ ನಡೆಸಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಸಲಾಗಿದೆ ಅರಿಂದ ನಾಯ ಕೆ.ಎನ್ ರಾಜಣ್ಣ ರವರು ಜಾತ್ಯತೀತ ರಾಜಕಾರಣಿ ಸಹಕಾರಿ ಕ್ಷೇತ್ರಕ್ಕೆ ಅಪಾರವಾದಂತಹ ಕೊಡುಗೆ ನೀಡಿದ್ದು ಅವರ ಮನೆಯ ಬಾಗಿಲಿಗೆ ಹೋದಂತಹ ಪ್ರತಿಯೊಬ್ಬರಿಗೂ ಪಕ್ಷತೀತವಾಗಿ ಸಹಾಯ ಮಾಡಿದ್ದಾರೆ ಸಜ್ಜನ ರಾಜಕಾರಣಿ ಅಹಿಂದ ನಾಯಕ ಕೆ.ಎನ್ ರಾಜಣ್ಣ ರವರ ವಿರುದ್ಧ ರಾಜಕೀಯ ಪಿತೂರಿಯನ್ನು ಖಂಡಿಸುವುದಾಗಿ ಹಾಗೂ ತುಮಕೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಕ್ಷತೀತವಾಗಿ ಬೆಂಬಲ ನೀಡಲಿದೆವೆ ನಾವು ಬೇರೆ ಬೇರೆ ಪಕ್ಷವಾದರೂ ಸಹ ರಾಜಕೀಯ ಬದಿಗೊತ್ತಿ ಕೆ.ಎನ್.ಆರ್ ರವರಿಗೆ ಬೆಂಬಲ ನೀಡುವುದಾಗಿ ಶಿವಣ್ಣ ತಿಳಿಸಿದ್ದಾರೆ ಈ ವೇಳೆ ನಿರ್ದೇಶಕರಾದ ರಂಗಸ್ವಾಮಿ ತರೀಕೆರೆ ಪ್ರಕಾಶ್ ಉಪಸ್ಥಿತರಿದ್ದರು @publicnewskunigal