ತಾಲ್ಲೂಕು ಪಂಚಾಯಿತಿ ನೂತನ ಕಾರ್ಯನಿರ್ವಹಣ ಅಧಿಕಾರಿಯಾಗಿ ವಸಂತ್ ಕುಮಾರ್ ಅಧಿಕಾರ ಸ್ವೀಕಾರ!
ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಸೋಮವಾರ ನೂತನ ಕಾರ್ಯನಿರ್ವಾಹಣಾ ಅಧಿಕಾರಿಯಾಗಿ ವಸಂತ ಕುಮಾರ್ ಹೆಚ್,ವಿ ರವರು ಅಧಿಕಾರ ಸ್ವೀಕರಿಸಿದರು ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಎಸ್,ನಾರಾಯಣ್ ರವರು ವರ್ಗವಣೆಗೊಂಡು ತೆರವಾಗಿದ್ದ ಸ್ಥಳಕ್ಕೆ ವಸಂತ್ ಕುಮಾರ್ ರವರನ್ನು ರಾಜ್ಯ ಸರ್ಕಾರ ನೇಮಿಸಿ ಆದೇಶಿಸಿದ ಹಿನ್ನೆಲೆಯಲ್ಲಿ ಸೋಮವಾರ ಅಧಿಕಾರ ವಹಿಸಿಕೊಂಡ ಅವರಿಗೆ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಕಾಂತರಾಜು ಹೂ ಗುಚ್ಚ ನೀಡಿ ಸ್ವಾಗತಿಸಿದರು ಈ ವೇಳೆ ಪಿಡಿಒಗಳಾದ ಚಂದ್ರಹಾಸ್,ಮಧುಸೂದನ್, ನಾರಾಯಣ್,ವಾಸು, ನರಸಿಂಹಮೂರ್ತಿ,ವತ್ಸಲ,ಸರಿತಾ,ದಿಲೀಪ್,ರಾಜಣ್ಣ, ಸೇರಿದಂತೆ ಕಚೇರಿಯ ಸಿಬ್ಬಂದಿವರ್ಗ ಈ ವೇಳೆ ಉಪಸ್ಥಿತರಿದ್ದರು @publicnewskunigal