ದಲಿತ ಹಿತ ರಕ್ಷಣಾ ಸಮಿತಿ ಸಭೆ ನಡೆಸದ ತಹಶಿಲ್ದಾರ್ ವಿರುದ್ಧ ಪ್ರತಿಭಟನೆ ನಡೆಸಿ ಪ್ರಕರಣ ದಾಖಲಿಸುವಂತೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ!
ಕುಣಿಗಲ್ ಸರ್ಕಾರದ ಆದೇಶದಂತೆ ಸತತ ಒಂದು ವರ್ಷದಿಂದ ತಾಲೂಕು ಮಟ್ಟದ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ಸಭೆ ನಡೆಸದೆ ಮತ್ತು ದಲಿತರ ಸಮಸ್ಯೆಗಳನ್ನ ಬಗೆಹರಿಸದೆ ಉದಾಸೀನತೆ,ಅಸಡ್ಡೆ ಮನೋ ಭಾವನೆ, ಕರ್ತವ್ಯ ನಿರ್ಲಕ್ಷತೆ ತೋರಿರುವ ತಹಶಿಲ್ದಾರ್ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆ 1989 ನಿಯಮ 4ರ ಅಡಿ ಪ್ರಕರಣ ದಾಖಲಿಸ ಬೇಕೆಂದು ಸೋಮವಾರ ದಲಿತ ಮುಖಂಡರು ಪ್ರತಿಭಟನೆ ನಡೆಸುವ ಮೂಲಕ ಒತ್ತಾಯಿಸಿದ್ದಾರೆ

ಕುಣಿಗಲ್ ಪಟ್ಟಣದಲ್ಲಿ ತಾಲ್ಲೂಕು ಕಚೇರಿ ಮುಂಭಾಗ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತರಕ್ಷಣ ಸಮಿತಿ ಸಭೆ ನಡೆಸದ ತಹಶಿಲ್ದಾರ್ ವಿರುದ್ಧ ನಡೆದ ಪ್ರತಿಭಟನೆ ಉದ್ದೇಶಿಸಿ ಮುಖಂಡರು ಮಾತನಾಡಿ, ಸತತ ಒಂದು ವರ್ಷಗಳಿಂದ ಸಭೆ ನಡೆಸಲು ಒತ್ತಾಯಿಸುತ್ತಾ ಬಂದಿದ್ದರು ಕಾಲಕಾಲಕ್ಕೆ ಸಭೆ ನಡೆಸಿರುವುದಿಲ್ಲ, ಒಂದು ವರ್ಷದಲ್ಲಿ ನಾಲ್ಕು ಸಭೆಗಳನ್ನು ನಡೆಸಬೇಕಿತ್ತು, ಸಭೆಯು ನಡೆಸಿಲ್ಲ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂದರು. ಸುಮಾರು ಎರಡು ವರ್ಷಗಳಿಂದಲೂ ತಾಲೂಕಿನ ಬೆಣಚಕಲ್ಲು, ತೆರೆದ ಕುಪ್ಪೆ, ಗುನ್ನಾ ಗೆರೆ, ಕೊಡವತ್ತಿ, ಮಲ್ಲಾಪುರ ಇನ್ನಿತರೇ ಗ್ರಾಮಗಳಲ್ಲಿ ದಲಿತರು ಜಮೀನಿಗೆ ಹಾದು ಹೋಗುವ ರಸ್ತೆಗಳನ್ನು ಬಲಾಡ್ಯರು ಅಡ್ಡಗಟ್ಟಿ ಉಳುಮೆಗೆ ಅಡ್ಡಿಪಡಿಸುತ್ತಿದ್ದರು ಕ್ರಮ ಕೈಗೊಂಡಿರುವುದಿಲ್ಲ.
ತೋಟಿ ಇನಾಂ ಜಮೀನನ್ನ ರೀ ಗ್ಯ್ರಾಂಟ್ ಮಾಡಲು 300ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದರು ಮರು ಮುಂಜೂರಾತಿಗೆ ಕ್ರಮ ಕೈಗೊಂಡಿರುವುದಿಲ್ಲ. ಡಿ,ಹೊಸಹಳ್ಳಿ ಹಾಲ್ಕೆರೆ, ಹೊಸಹಳ್ಳಿ, ಉಜ್ಜಿನಿ, ನೀಲಸಂದ್ರ ಗೋವಿಂದಯ್ಯನ ಪಾಳ್ಯ ಗ್ರಾಮದಲ್ಲಿ ಸ್ಮಶಾನ ಒತ್ತುವರಿ ಮಾಡಿಕೊಂಡು ಶವ ಸಂಸ್ಕಾರ ಮಾಡಲು ಅಡ್ಡಿ ಪಡಿಸಿದ್ದರೂ ಒತ್ತುವರಿ ಯನ್ನ ತೆರುವು ಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಹೊಸಕೆರೆ, ಮುತುಗದಹಳ್ಳಿ, ಇಪ್ಪಾಡಿ ಹೊಸಪಾಳ್ಯ ಗ್ರಾಮದ ದಲಿತರಿಗೆ ನಿವೇಶನ ನೀಡಲು ಭೂಮಿ ಸ್ವಾಧೀನ ಪಡಿಸಿಕೊಂಡಿರುವ ಜಾಗವನ್ನ ಬಲಾಢ್ಯರು ಒತ್ತುವರಿ ಮಾಡಿರುತ್ತಾರೆ, ಒತ್ತುವರಿ ಮಾಡಿಕೊಂಡ ಜಾಗವನ್ನು ಅಧಿಕಾರಿಗಳು ಬಲಾಡ್ಯರಿಗೆ ಅಕ್ರಮವಾಗಿ ಖಾತೆ ಮಾಡಿ ಕೊಟ್ಟಿರುತ್ತಾರೆ, ಕ್ರಮ ಕೈಗೊಳ್ಳಬೇಕೆಂದು ಸತತ ಐದು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದರು ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ. ಚಾಕೇನಹಳ್ಳಿ , ಹೆಗ್ಗಡತಹಳ್ಳಿ, ಹೊಸಪುರ, ಉಜ್ಜಿನಿ ಬುಕ್ಕ ಸಾಗರ, ಹಳೆವೂರು ಮತ್ತಿತರೆ ಗ್ರಾಮದ ದಲಿತರ ಜಮೀನಿಗೆ ಬಲಾಡ್ಯರು ಅತಿಕ್ರಮ ಪ್ರವೇಶ ಮಾಡಿದ್ದರೂ ರಕ್ಷಣೆ ನೀಡಿರುವುದಿಲ್ಲ. ಕಳೆದ ವರ್ಷ ಸೆಪ್ಟಂಬರ್ 21ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿತರಕ್ಷಣ ಸಮಿತಿ ಸಭೆ ನಡೆದಿದ್ದು ಒಂದು ವರ್ಷ ಕಳೆಯುತ್ತಾ ಬಂದರೂ ಮತ್ತೆ ಸಭೆ ನಡೆಸಿರುವುದಿಲ್ಲ, ಮತ್ತು ಸಮಸ್ಯೆಗಳನ್ನು ಬಗೆಹರಿಸಿರುವುದಿಲ್ಲ, ಸಭೆ ನಡೆಸಿದ್ದರೆ ಇಂದಿಗೆ ನಾಲ್ಕು ಸಭೆಗಳನ್ನು ನಡೆಸಬೇಕಾಗಿತ್ತು, ಸಭೆ ನಡೆಸುವಲ್ಲಿ ತಹಶಿಲ್ದಾರ್ ರಶ್ಮಿ ವಿಫಲರಾಗಿದ್ದಾರೆ, ಇವರ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಾಗಿದ್ದರೆ ಕರ್ತವ್ಯ ನಿರ್ಲಕ್ಷತೆ ಅಸಡ್ಡೆ ಮತ್ತು ಉದಾಸಿನತೆ, ತೋರಿರುವ ಇವರ ವಿರುದ್ಧ ಪ, ಜಾ/ ಪ,ವರ್ಗಗಳ ದೌರ್ಜನ್ಯ ತಡೆ ಕಾಯ್ದೆ ನಿಯಮ 4ರ ಅಡಿ ಪ್ರಕರಣ ದಾಖಲಿಸಲು ಒತ್ತಾಯಿಸುತ್ತಾ ಕೂಡಲೇ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಉಪವಿಭಾಗಾಧಿಕಾರಿಗಳ ಕಚೇರಿಯ ಗ್ರೇಡ್ (2) ತಹಶಿಲ್ದಾರ್ ಕೀರ್ತಿ ರವರಿಗೆ ಮನವಿ ಸಲ್ಲಿಸಲಾಯಿತು, ಪ್ರತಿಭಟನೆಯಲ್ಲಿ ಗೌಡಗೆರೆ ವರದರಾಜು,ಎಸ್ ಆರ್ ಚಿಕ್ಕಣ್ಣ,ದಲಿತ್ ನಾರಾಯಣ್,ಎಸ್ ಟಿ ರಾಜು ರಾಮಲಿಂಗಯ್ಯ, ಸ್ವಾಮಿ, ಗವಿಯಪ್ಪ, ವನಜ, ರಾಮಕೃಷ್ಣ ಚೆನ್ನಯ್ಯ,ಶ್ರೀನಿವಾಸ್, ಆನಂದ್ ,ಲಕ್ಷ್ಮೀನರಸಿಂಹ, ಜೈ ಕುಮಾರ್, ನಾಗರಾಜು, ರಾಜು, ವೆಂಕಟರಂಗಯ್ಯ, ರಂಗಸ್ವಾಮಿ,ಶಶಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ಧರು @publicnewskunigal