ಅದ್ದೂರಿಯಾಗಿ ಜರುಗಿದ ತಪೊ ಕ್ಷೇತ್ರ ಕಗ್ಗೆರೆಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ!
ಕುಣಿಗಲ್ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ತಪೋ ಕ್ಷೇತ್ರ ಕಗ್ಗೆರೆಯಲ್ಲಿ ಮಂಗಳವಾರ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸ್ವಾಮಿಯ ಶಟ್ಥಲಧ್ವಜ ಹರಾಜು ಪ್ರಕ್ರಿಯೆಯಲ್ಲಿ ಎರಡುವರೆ ಲಕ್ಷರೂಪಾಯಿಗೆ ಹರಾಜು ಮೂಲಕ ಶಾಸಕ ಡಾ.ರಂಗನಾಥ್ ರವರು ರಥೋತ್ಸವದ ಮೊದಲ ಪೂಜೆಗೆ ಭಾಜನರಾದರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಬಳಿಕ ರಥೋತ್ಸವದಲ್ಲಿ ಭಾಗಿಯಾದರು,ಭಕ್ತರು ತಮ್ಮ ಇಷ್ಟಾರ್ಥಗಳಿಗಾಗಿ ಪ್ರಾರ್ಥಿಸಿ ರಥಕ್ಕೆ ಹಣ್ಣು ಧವನ ತೂರುವ ಮೂಲಕ ಪೂಜೆ ಸಲ್ಲಿಸಿದರು ಜಾತ್ರಮಹೊತ್ಸವಕ್ಕೆ ಬಂದಿದ್ದ ಭಕ್ತರು ರಥೋತ್ಸವದ ವೇಳೆ ಭಕ್ತರಿಗೆ ಮಜ್ಜಿಗೆ,ಪಾನಕ ಕೋಸಂಬರಿ,ಎಳನೀರು,ಹಾಗೂ ಅಲ್ಲಲ್ಲಿ ಅರವಂಟಿಗೆ ಮೂಲಕ ಪ್ರಸಾದ ವಿತರಿಸಿದರು, ಜಾತ್ರಮಹೊತ್ಸವದ ಪ್ರಯುಕ್ತ ಸಿದ್ದಲಿಂಗೇಶ್ವರ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು ಈ ವೇಳೆ ಶಾಸಕ ಡಾ.ರಂಗನಾಥ್ ಮಾತನಾಡಿ ರಾಜ್ಯದ ಮೂಲೆ ಮೂಲೆಯಿಂದಲು ತಪೋಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಸಿದ್ದಲಿಂಗೇಶ್ವರ ಸ್ವಾಮಿಯ ದರ್ಶನ ಪಡೆದರೆ ಒಂದು ವಿಶೇಷವಾದ ಶಕ್ತಿ ದೊರೆಯುತ್ತದೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಜಾತ್ರಮಹೊತ್ಸವನ್ನು ವಿಶೇಷವಾಗಿ ಆಯೋಜನೆ ಮಾಡಿದೆ ಎಲ್ಲರು ಜಾತ್ರಮಹೊತ್ಸವದಲ್ಲಿ ಭಾಗಿಯಾಗಿ ದೇವರ ಆಶಿರ್ವಾದ ಪಡೆದುಕೊಳ್ಳಿ ಎಂದರು ಕಾರ್ಯಕ್ರಮದಲ್ಲಿ ತುಮಕೂರು ಅಪಾರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ,ತಹಶೀಲ್ದಾರ್ ಕರಿಯನಾಯ್ಕ್, ಬಾಳೆಹೊನ್ನೂರು ಶಾಖಾ ಮಠದ ರೇಣುಕಾಶಿವಚಾರ್ಯ ಸ್ವಾಮಿಜಿ,ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ,ನೆಲಮಂಗಲದ ಬಸಣ್ಣದೇವರ ಮಠದ ಸ್ವಾಮಿಜಿ,ದೇವಾಲಯದ ಕಾರ್ಯನಿರ್ವಣ ಅಧಿಕಾರಿ,ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು,@publicnewskunigal